ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ ೨ನೇ ಹಂತದ ಚಿತ್ರೀಕರಣ ೧೧ ರಿಂದ ಆರಂಭಗೊಳ್ಳಲಿದೆ. ಮೈಸೂರು, ಕುಶಾಲನಗರ, ಸಕಲೇಶಪುರ, ಉಡುಪಿ, ಬೆಂಗಳೂರಿನಲ್ಲಿ ೫ ಹಾಡಿನ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಛಾಯಾಗ್ರಹಣ - ಮ್ಯಾಥ್ಯೂರಾಜನ್, ಸಂಗೀತ - ಮೈಸೂರು ಮೋಹನ್, ನೃತ್ಯ - ನಾಗೇಶ್, ಸಾಹಸ - ಸುಪ್ರೀಂ ಸುಬ್ಬು, ಸಂಭಾಷಣೆ - ಬಿ.ಎಂ. ಮಧು, ಕಲೆ-ರೇವಣ್ಣ, ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ, ಸಾಲೋಮನ್ ಜಾರ್ಜ್, ನಿರ್ಮಾಣ ಮೇಲ್ವಿಚಾರಣೆ - ಗಂಗು, ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ಡಾ|| ನಂದಿನಿ, ಶೃತಿ, ಲಿಂಟೋ, ಬಿ.ಸಿ. ಪಾಟೀಲ್, ಶಂಕರ್ ರಾವ್, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಮೂಗು ಸುರೇಶ, ಬ್ಯಾಂಕ್ ಜನಾಧನ್, ಬಿರಾದ್, ಹೊನ್ನವಳ್ಳಿ ಕೃಷ್ಣ, ಎಂ.ಎಸ್. ಉಮೇಶ್, ಮೋಹನ್ ಜುನೇಜ, ಮನ್ ದೀಪ್ ರಾಯ್, ತಬಲಾ ನಾಣಿ, ತೇಜ್ ವಿನಯ್ ಮುಂತಾದವರಿದ್ದಾರೆ.